14th June 2025
ವರದಿ;ರಾಜಶೇಖರ ಡೋಣಜಮಠ
ಚಡಚಣ;ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ ಅವರ ವ್ಯಾಪ್ತಿಯಲ್ಲಿ ಬರುವ ಚಡಚಣ ತಾಲೂಕಿನ ನಂದ್ರಾಳ ಗ್ರಾಮದ ನಡುವಿನ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹದಗೆಟ್ಟ ರಸ್ತೆಯಿಂದ ನಿತ್ಯ ತೆರಳುವ ವಾಹನಗಳು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ವಾಹನ ಸವಾರರು, ರಸ್ತೆಯಲ್ಲಿ ಬಿದ್ದಿರುವ ತಗ್ಗುಗುಂಡಿಗಳ ಜೊತೆಗೆ ಸಾಗುವ ದುಃಸ್ಥಿತಿ ಎದುರಾಗಿದೆ. ಮಳೆಗೆ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿದೆ.ಕೆಲವೊಂದುಸಲ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಗುಂಡಿಯಲ್ಲಿ ಬಿದ್ದು ಬಟ್ಟೆ ಹೊಲಸಾಗುವದರಿಂದ ಹಿಡಿದು ಸಣ್ಣ ಗಾಯಗಳಾಗಿರುವ ಘಟನೆ ಕೂಡಾ ಆಗಿವೆ ಎಂದು ಸ್ಥಳಿಯರು ಹೇಳಿದ್ದಾರೆ.
ಈ ಮಾರ್ಗವಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇನ್ನೂ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಮುಚ್ಚಿಕೊಂಡಿರುವದರಿ0ದ ವಾಹನಗಳು ಸ್ಲಿಪ್ ಆಗುತ್ತಿವೆ.
ಈ ರಸ್ತೆ ಯಾವಾಗ ದುರಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ಕಾದು ಕುಳಿತಿದ್ದಾರೆ. ಸಂಚರಿಸಬೇಕಾದ ಜನರು ಹದಗೆಟ್ಟ ರಸ್ತೆಗೆ ಹೆದರಿ ವಾಹನ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ಸವಾರರು ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳಾಗಿವೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುವುದು ಮತ್ತಷ್ಟು ತ್ರಾಸದಾಯಕವಾಗಿದೆ.
ಈ ರಸ್ತೆಯನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ದುರಸ್ತಿ ಮಾಡಿ ಸುಗಮ ಸಂಚಾರ ಕಲ್ಪಿಸಿಕೊಡಬೇಕು. ಶಾಸಕರಾದ ವಿಠ್ಠ¯ ಕಟಕಧೋಂಡ ಅವರು ಕೂಡಾ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.
* ಪ್ರತಿನಿತ್ಯ ನಂದ್ರಾಳ ಗ್ರಾಮದಿಂದ ಶಾಲೆ, ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟು ಸಲುವಾಗಿ ಇಂಡಿ, ಹಲಸಂಗಿ, ವಿಜಯಪುರ, ಚಡಚಣ, ಝಳಕಿ ಗ್ರಾಮಗಳಿಗೆ ತೆರಳಬೇಕು ಹದಗೆಟ್ಟ ರಸ್ತೆಯಿಂದ ಬಿದ್ದು ಎದ್ದು ಹಾಗೆ ವಾಹನ ಚಲಾಯಿಸಿಕೊಂಡು ದಿನಾಲು ಸಂಚಾರ ಮಾಡುವುದೇ ಸವಾಲಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಆದರು ಈವರೆಗೆ ರಸ್ತೆ ಕಾಮಗಾರಿಗೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಅದಷ್ಟು ಬೇಗನೆ ಇತ್ತ ಕಡೆ ಗಮನ ಹರಿಸಿ ಆಗುವ ತೊಂದರೆಗಳಿಗೆ ಸಹಕರಿಸಿ ಎಂದು ಗ್ರಾಮಸ್ಥರ ಆಗ್ರಹವಾಗಿದೆ.
ಪರಮೇಶ್ವರ ಕಾಂಬಳೆ ನಿವಾಸಿ
• ನಂದ್ರಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ನಾನು ಈಗಾಗಲೆ ಸ್ಪಂಧಿಸಿದ್ದು ಇರುತ್ತದೆ ಅದರಂತೆ ನಾನು ಹದಗೆಟ್ಟ ನಂದ್ರಾಳದಿ0ದ ಮುಖ್ಯ ರಸ್ತೆಗೆ ಕೂಡುವ ಸುಮಾರು ೯ ಕಿ.ಮಿ ರಸ್ತೆ ನಿರ್ಮಾಣದ ೧೦ ಕೋಟಿ ರೂ ಹಣ ಬಿಡುಗಡೆ ಆಗಿದೆ.ಈಗಾಗಲೆ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ ಆದರೆ ೯ಕಿ.ಮಿ ರಸ್ತೆ ನಿಮಾಣಕ್ಕೆ ೯ಕೋಟಿ ಸಾಕಾಗುತ್ತದೆ ಉಳಿದ ೧ ಕೋಟಿ ಹಿಂಗಣಿ ರಸ್ತೆ ಅಭೀವೃದ್ದಿಗೆ ಇಡಲು ನಿರ್ಧರಿಸಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ ಆದರು ಕೆಲವು ತಿಂಗಳಲ್ಲಿ ನಂದ್ರಾಳ ರಸ್ತೆ ನಿರ್ಮಾಣ ಮಾಡಲಿದ್ದೆನೆ.
• ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ